skip to main |
skip to sidebar
ಕೊರಗ ತನಿಯನ ಕೋಲಿನ ಮಹತ್ವ...
‘ಕೋಲು ಹಿಡಿದವರೆಲ್ಲಾ ಅಜ್ಜರಲ್ಲ!’ ಯಾಕೆ ಈ ಮಾತನ್ನು ಹೇಳುತ್ತಿದ್ದೇನೆಂದರೆ... ಕೊರಗ ಜನಾಂಗದ ಕುಲ ಪುರುಷ - ತನಿಯನ ಕಾಲ ನಂತರ (ಬ್ರಾಹ್ಮಣರಿಂದ ನಡೆದ ವ್ಯವಸ್ಥಾ ಬದ್ಧವಾದ ಕೊಲೆ), ಆತನನ್ನು ಕೊರಗ ಸಮುದಾಯದ ಹಿರಿಯರು- ದೈವತ್ವಕ್ಕೇರಿಸಿ ಕುಲಪುರುಷನೆಂದು ಆರಾಧಿಸಲಾರಂಭಿಸಿದರು. ಮರದಡಿಯಲ್ಲಿ ಕಲ್ಲನಿಟ್ಟು ಪೂಜಿಸಲಾರಂಭಿಸಿದರು. ಕಲ್ಲಿನ ಮೇಲೆ ತನಿಯನಿಗೆ ಪ್ರಿಯವಾದ ಶೇಂಧಿಯನ್ನು ಇಡಲಾರಂಭಿಸಿದರು. ಅಲ್ಲೊಂದು ಕೋಲು ಇಟ್ಟರು. ಯಾಕೆಂದರೆ, ಕೊರಗ ಸಮುದಾಯದ ತನಿಯನಿಗೆ ‘ಆಮೆ - ಬೇಟೆ’ಯಾಡುವ ಹವ್ಯಾಸವಿತ್ತು. ಆತ ಹೋದಲೆಲ್ಲಾ ಕೋಲು ಹಿಡಿದುಕೊಂಡು ಹೋಗುತ್ತಿದ್ದ. ಆಮೆ ಹುಡುಕಬೇಕಾದರೆ ‘ಕೋಲು’ ಬೇಕೇ ಬೇಕು. ಕೋಲು ಇಲ್ಲದಿದ್ದರೆ ಆಮೆ ಬೇಟೆಯಾಡಲು ಸಾಧ್ಯವಿಲ್ಲ. ಹಾಗಾಗಿ, ತನಿಯನನ್ನು ಪ್ರತಿಸ್ಟಾಪಿಸಿದಲೆಲ್ಲಾ ಕೋಲು ಇಡುತ್ತಿದ್ದರು - ಕೊರಗ ಸಮುದಾಯದ ಬಾಂಧವರು. ಆದರೆ, ಯಾವಾಗ ಇತರ ಸಮುದಾಯದವರು ಕೊರಗರ ‘ತನಿಯ’ನನ್ನು ಪೂಜಿಸಲು ಆರಂಭಿಸಿದರೋ, ಅವರಿಗೆ ಕೋಲಿನ ಮಹತ್ವ ತಿಳಿಯಲಿಲ್ಲ. ಯಾಕೆಂದರೆ, ಕರಾವಳಿಯಲ್ಲಿ ಕೊರಗರನ್ನು ಬಿಟ್ಟರೆ ಬೇರೆ ಯಾರೂ - ಆಮೆ ಬೇಟೆಯಾಡಿದವರಲ್ಲ. ಅವರೂ ತನಿಯನ ಕಲ್ಲಿನಲ್ಲಿ ಕೋಲನ್ನು ಇಟ್ಟು ‘ತನಿಯಜ್ಜ’ ಎಂದು ಬಿಟ್ಟರು, ಇತರರೂ ‘ಕೊರಗಜ್ಜ’ ಎಂದರು! ಆದರೆ ತನಿಯ ಕಾಲವಾದದ್ದು ತನ್ನ ಬರಿಯ ಹದಿನೆಂಟನೆ ವಯಸ್ಸಿನಲ್ಲಿ! ಆತನಿಗೆ ಕೋಲು ಬೇಕಾದದ್ದು ಆಮೆ ಬೇಟೆಯಾಡಲೇ ಹೊರತು ಆಧಾರಕ್ಕಲ್ಲ! ಆತ ಅಜ್ಜನಾಗಲೇ ಇಲ್ಲ. ಆದರೆ, ಇತರರು ಆತನನ್ನು ‘ಅಜ್ಜ’ನನ್ನಾಗಿ ಮಾಡಿಬಿಟ್ಟರು!
(ಇದೀಗ ಕೋಲಿನ ಬದಲು 'ಬೆಳ್ಳಿ ದಂಡು' ಇಟ್ಟು ಪೂಜಿಸುತ್ತಿದ್ದಾರೆ!)
- ಹೃದಯ
ಚಿತ್ರ : ಸಾಯಿರಾಜ್ ಜ್ಯೋತಿ
0 comments:
Post a Comment