Pages

Sunday 25 May 2014

ಎಚ್ಚಿ ರನ್ನೆರ್? ಸಜ್ಜಿ ರನ್ನೇರ ?!

ಕೊರಗರ ಕೂಡು ಕಟ್ಟಿನಲ್ಲಿ ಅವರದೇ ಆದ ಕಟ್ಟುಕಟ್ಟಳೆಗಳು (ಸಂಪ್ರದಾಯ) ಇದೆ. ಅವುಗಳಲ್ಲಿ ಸತ್ಕಾರ ಮತ್ತು ಉಪಚಾರವೂ ಒಂದು. ಮನೆಗೆ ಬಂದ ನೆಂಟರು ಅಥವಾ ಬೀಗರನ್ನು ಬರಮಾಡಿ ಕೊಳ್ಳುವುದು ಹಾಗೂ ಕ್ಷೇಮ ಸಮಚಾರಗಳನ್ನು ವಿಚಾರಿಸುವುದರಲ್ಲಿ ವಿಶಿಷ್ಟತೆ ಇದೆ.
ಮನೆಯ ಅಂಗಳಕ್ಕೆ ಕಾಲಿಡುವಾಗಲೇ ಬಂದ ನೆಂಟರಿಷ್ಟರು... 'ಬಿನ್ನೆರ್ ಬತ್ತೆರ್...' ಎಂದು ನಗು ಗಾಂಭೀರ್ಯದ ಮಾತಿನಿಂದ ಪ್ರವೇಶ ಕೇಳಿದಾಗ, 'ಬಲೆ ಬಲೆ ಜಾಲ್ಗೆ ಬಲೆ...' ಎಂದು ಅನುಮತಿ ನೀಡಿ, ಮೊದಲು ಅವರಿಗೆ ಕಾಲು ತೊಳೆಯಲು ಒಂದು ತಂಬಿಗೆ ನೀರು ಕೊಟ್ಟ - ಕೂರಲು ಮಣೆಯೋ ಚಾಪೆಯೋ ಹಾಸಿ ದಣಿವು ತಗ್ಗಿಸುವಂತೆ ಮತ್ತು ದಾಹ ತೀರಿಸಲು ನೀರು ಕೊಡುವುದು ವಾಡಿಕೆ.
ಮುಂದುವರಿದು... 'ನೀವು ಮತ್ತು ಮನೆಯವರು ಹೇಗಿದ್ದಾರೆ..? ಚೆನ್ನಾಗಿದ್ದಾರ..?' ಎಂದು ಕ್ಷೇಮ ಸಮಚಾರ ಕೇಳುತ್ತಾರೆ ಮನೆಯವರು. ಅದಕ್ಕವರು.., 'ನಿಮ್ಮ ಮತ್ತು ನಮ್ಮ ಹಿರಿಯರ ದಯೆಯಿಂದ ಸೌಖ್ಯ'ವೆಂದು ಹೇಳುತ್ತಾರೆ. ಪರಸ್ಪರ ಕೈಮುಗಿದು ನಮಸ್ಕಾರ ಸಲ್ಲಿಸುತ್ತಾರೆ. ಕೂಡಲೆ ವೀಳ್ಯದೆಲೆ ವಿನಿಮಯವೂ ನಡೆದು ಬಾಯಿ ಕೆಂಪಾಗುತ್ತದೆ.
ದನದ ಮಾಂಸ (ಒಣಗಿದ ಮಾಂಸ ಯಾ ಹಸಿ ಮಾಂಸ)ದ ಪದಾರ್ಥದೊಂದಿಗೆ ಊಟಕ್ಕೆ ಸಜ್ಜಾಗುತ್ತಾರೆ.
ಇಂಥ ಕೆಲವು ಸನ್ನಿವೇಶಗಳು ನೋಡಲು - ಅನುಭವಿಸಲು ಈ ಕಾಲದಲ್ಲಿ ಮತ್ತು ಇನ್ನು ಮುಂದಿನ ಕಾಲದಲ್ಲಿ ಸಾಧ್ಯವಿಲ್ಲ! ಕನಸು ಕಾಣಬಹುದಷ್ಟೇ! ಅಥವಾ ಕಳೆದು ಹೋದ ಆ ದಿನಗಳನ್ನು ನೆನಪು ಮಾಡಬಸಹುದಷ್ಟೇ! ಎಚ್ಚಿ ರನ್ನೆರ್..?(ಹೇಗಿದ್ದೀರ?) ಸಜ್ಜಿ ರನ್ನೆರ...?! (ಚೆನ್ನಾಗಿದ್ದೀರಾ?)


- ಹೃದಯ

0 comments:

Post a Comment

 

Blogger news

Blogroll

About