ಬದಲಾದ ಕಾಲಘಟ್ಟದಲ್ಲಿ, ಕೊರಗ ಮಹಿಳೆ ‘ಹಿಂದಿನ’ವರಿಗಿಂತ - ಈಗ ಹೆಚ್ಚು ಅದೃಷ್ಟಶಾಲಿ ಎನ್ನಬಹುದು. ಹಿಂದಿನಿಂದಲೂ ಕೊರಗ ಮಹಿಳೆಯ ಕುರಿತಾಗಿ, ಸಮಾಜದಲ್ಲಿರುವ - ಗೌರವಯುತವಾದ ಮಾತೃ ಭಾವನೆ ಮತ್ತು ಏಕತೆಯ ಪರಿಕಲ್ಪನೆ ಇತರ ಎಲ್ಲಾ ಆದಿವಾಸಿ (ಗಿರಿಜನ) ಮತ್ತು ಪ್ರಭಾವಶಾಲಿ ಸಮುದಾಯಕ್ಕಿಂತಲೂ ಕೊರಗ ಸಮುದಾಯದವರಲ್ಲಿ ಹೆಚ್ಚು ಪ್ರಗತಿಪರವಾಗಿದೆ. ಆದಿಕಾಲದ ಕೊರಗ ಮಹಿಳೆಯರು ತಮ್ಮ ದೇಹವನ್ನು ಸೊಪ್ಪು ಮತ್ತು ಅಲಂಕೃತ ಮಣಿಸರಗಳಿಂದ ಮುಚ್ಚಿಕೊಳ್ಳುತ್ತಿದ್ದರು. ಈಗ ಎಲ್ಲವೂ ಅನುಕೂಲಕರವಾಗಿ ಮಾರ್ಪಾಟಾಗಿದೆ. ಹಾಗಾಗಿಯೇ ಕೊರಗ ಮಹಿಳೆಯರು ‘ಹಿಂದಿನವರಿಗಿಂತ’ ಹೆಚ್ಚು ಅದೃಷ್ಠಶಾಲಿ ಎಂದಿರುವುದು.
ಕೊರಗ ಸಮುದಾಯವನ್ನು ಹೊರತು ಪದಿಸಿದರೆ ಒಟ್ಟು ಸಮಾಜದಲ್ಲಿ - ಮಹಿಳೆಯರ ಕುರಿತಾಗಿ ‘ತಾರತಮ್ಯ’ ಕಂಡು ಬರುತ್ತದೆ. ಮುಖ್ಯವಾಗಿ- ಹೆಣ್ಣು ಭ್ರೂಣ ಹತ್ಯೆ... ಶ್ರೀಮಂತ ಕುಟುಂಬಗಳು ತಮ್ಮ ಆಸ್ತಿ ಪಾಸ್ತಿ ಪರರ ಪಾಲಾಗಬಹುದೆಂಬ ಭೀತಿಯಲ್ಲಿ ಮತ್ತು ಗಂಡು ಮಗುವಾದರೆ ಆಸ್ತಿ ತಮ್ಮಲ್ಲೇ ಉಳಿಯಬಹುದೆಂಬ ದುರಾಲೋಚನೆಯಿಂದಾಗಿ- ಹೆಣ್ಣು ಭ್ರೂಣ ಹತ್ಯೆಗೆ ಮುಂದಾಗುತ್ತಾರೆ ಎಂಬುದು ವಾಸ್ತವವಾದರೆ, ಕೊರಗ ಸಮುದಾಯದಲ್ಲಿ ಇಂತಹ ಪ್ರಕರಣಗಳೇ ಕಂಡು ಬಂದಿಲ್ಲ. ಇದು ಕೊರಗರ ಹೃದಯ ಶ್ರಿಮಂತಿಕೆ. ಇದಕ್ಕೆ ಕೊರಗ ಸಮುದಾಯದ ಆಧರಣೀಯ ದೈವ ‘ಅಪ್ಪ- ಬೈಕಾಡ್ತಿ ’(ಕೊರಗ ಸಮುದಾಯದ ಕುಲದೈವ - ಕೊರಗ ತನಿಯನ ತಾಯಿ)ಯ ಭಯ - ಭಕ್ತಿ ಕಾರಣವಾಗಿರಬಹುದು.
ಇಂದಿನ ಔದ್ಯೋಗಿಕ ರಂಗ, ಸಂಘಟನೆ, ಶಿಕ್ಷಣ, ಆಧುನಿಕತೆ, ಸಮಾಜದ ಬದಲಾದ ದೃಷ್ಟಿಕೋನಗಳು ಹೆಚ್ಚು ಪ್ರಗತಿಪರವಾಗಿದೆ. ಒಟ್ಟು ಸಮಾಜ ಕೊರಗ ಸಮುದಾಯದಲ್ಲಿ ಮಹಿಳಾ ಹಿತಚಿಂತನೆಯ ದೃಷ್ಟಿಕೋನವನ್ನು ಅನುಸರಿಸಿದರೆ, ಎಲ್ಲಾ ಸಮುದಾಯದ ಮಹಿಳೆಯರೂ ಸುರಕ್ಷಿತರಾಗಬಹುದು.
- ಸುನೀತಾ ಸೂರ್ಯವಂಶ, ಬೆಳುವಾಯಿ
ಕೊರಗ ಸಮುದಾಯವನ್ನು ಹೊರತು ಪದಿಸಿದರೆ ಒಟ್ಟು ಸಮಾಜದಲ್ಲಿ - ಮಹಿಳೆಯರ ಕುರಿತಾಗಿ ‘ತಾರತಮ್ಯ’ ಕಂಡು ಬರುತ್ತದೆ. ಮುಖ್ಯವಾಗಿ- ಹೆಣ್ಣು ಭ್ರೂಣ ಹತ್ಯೆ... ಶ್ರೀಮಂತ ಕುಟುಂಬಗಳು ತಮ್ಮ ಆಸ್ತಿ ಪಾಸ್ತಿ ಪರರ ಪಾಲಾಗಬಹುದೆಂಬ ಭೀತಿಯಲ್ಲಿ ಮತ್ತು ಗಂಡು ಮಗುವಾದರೆ ಆಸ್ತಿ ತಮ್ಮಲ್ಲೇ ಉಳಿಯಬಹುದೆಂಬ ದುರಾಲೋಚನೆಯಿಂದಾಗಿ- ಹೆಣ್ಣು ಭ್ರೂಣ ಹತ್ಯೆಗೆ ಮುಂದಾಗುತ್ತಾರೆ ಎಂಬುದು ವಾಸ್ತವವಾದರೆ, ಕೊರಗ ಸಮುದಾಯದಲ್ಲಿ ಇಂತಹ ಪ್ರಕರಣಗಳೇ ಕಂಡು ಬಂದಿಲ್ಲ. ಇದು ಕೊರಗರ ಹೃದಯ ಶ್ರಿಮಂತಿಕೆ. ಇದಕ್ಕೆ ಕೊರಗ ಸಮುದಾಯದ ಆಧರಣೀಯ ದೈವ ‘ಅಪ್ಪ- ಬೈಕಾಡ್ತಿ ’(ಕೊರಗ ಸಮುದಾಯದ ಕುಲದೈವ - ಕೊರಗ ತನಿಯನ ತಾಯಿ)ಯ ಭಯ - ಭಕ್ತಿ ಕಾರಣವಾಗಿರಬಹುದು.
ಇಂದಿನ ಔದ್ಯೋಗಿಕ ರಂಗ, ಸಂಘಟನೆ, ಶಿಕ್ಷಣ, ಆಧುನಿಕತೆ, ಸಮಾಜದ ಬದಲಾದ ದೃಷ್ಟಿಕೋನಗಳು ಹೆಚ್ಚು ಪ್ರಗತಿಪರವಾಗಿದೆ. ಒಟ್ಟು ಸಮಾಜ ಕೊರಗ ಸಮುದಾಯದಲ್ಲಿ ಮಹಿಳಾ ಹಿತಚಿಂತನೆಯ ದೃಷ್ಟಿಕೋನವನ್ನು ಅನುಸರಿಸಿದರೆ, ಎಲ್ಲಾ ಸಮುದಾಯದ ಮಹಿಳೆಯರೂ ಸುರಕ್ಷಿತರಾಗಬಹುದು.
- ಸುನೀತಾ ಸೂರ್ಯವಂಶ, ಬೆಳುವಾಯಿ