ಹಿಂದಿನ ಕಾಲದಲ್ಲಿ ಊರಿನ ಮಾರಿ ಓಡಿಸುವಾಗ, ಕೋಲ - ನೇಮದ ಭಂಡಾರ ಹೋಗುವಾಗ ಅಥವಾ ಇನ್ನಾವುದೇ ಮೆರವಣಿಗೆಯಲ್ಲಿ ಡೊಳ್ಳಿನ ಕೊರಗರು ಮುಂದಿನ ಸಾಲಿನಲ್ಲಿ ಸುಮಾರು ದೂರದಲ್ಲಿ ಹೋಗಬೇಕಿತ್ತು. ಉಳಿದ ವಾದ್ಯದವರು ಮತ್ತು ಗುತ್ತು- ಬರ್ಕೆಯ ಉತ್ತಮರು ತುಂಬಾ ಹಿಂದಿನಿಂದ ನಿಧಾನವಾಗಿ ಗತ್ತು ಗಾಂಭೀರ್ಯತೆಯಿಂದ ಬರುತ್ತಿದ್ದರು!
ಇಲ್ಲಿ ಮಾತ್ರ ಕೊರಗರು ಮುಂದೆ ಯಾಕೆ..?!
ಶೋಷಣೆಯ ಕಟ್ಟಕಡೆಗೆ ತಳ್ಳಲ್ಪಟ್ಟ ಈ ಕೊರಗ ಸಮುದಾಯ ಆ ಒಂದು ವಿಚಾರದಲ್ಲಿ ಭಾರೀ ಮರ್ಯಾದೆ ಪಡೆಯುತ್ತಿತ್ತೆಂದು ತಿಳಿಯಬೇಡಿ!
ಕಾರಣವಿಷ್ಠೇ, ಅಂದಿನ ಕಾಲದಲ್ಲಿ ಕಾಲು ದಾರಿಗಳು ಬಹಳ ದುರ್ಗಮವಾಗಿತ್ತು. ದಟ್ಟ ಕಾಡಿತ್ತು! ಹಳ್ಳ ಕೊಳ್ಳದ ಮಧ್ಯೆ ಹಾದು ಹೋಗಬೇಕಾದರೆ ಆಳ ಅರಿವು ಗೊತ್ತಿರಲ್ಲಿಲ್ಲ. ಒಟ್ಟಾರೆಯಾಗಿ ದುರ್ಗಮ ದಾರಿ ಬಹಳ ಅಪಾಯಕಾರಿಯಾಗಿತ್ತು. ಕಾಡಿನ ಕ್ರೂರ ಮೃಗಗಳು ಹಸಿವೆಗಾಗಿ ಮನುಷ್ಯರ ಮೇಲೆ ದಾಳಿಯಿಟ್ಟರೆ, ಅದು ಕೊರಗರನ್ನು ತಿನ್ನಲಿ. ಏನಾದರೂ ಅನಾಹುತವಾದರೆ - ಅದು ಕೊರಗರಿಗೇ ಆಗಲಿ, ನಮಗೆ ಏನೂ ಆಗಬಾರದು ಎನ್ನುವ ದುರಾಲೋಚನೆ ಮತ್ತು ದೂರಾಲೋಚನೆ ಅಂದಿನ ಉತ್ತಮರಿಗಿತ್ತು!!
- ಹೃದಯ
— with Apoorva Rao.ಇಲ್ಲಿ ಮಾತ್ರ ಕೊರಗರು ಮುಂದೆ ಯಾಕೆ..?!
ಶೋಷಣೆಯ ಕಟ್ಟಕಡೆಗೆ ತಳ್ಳಲ್ಪಟ್ಟ ಈ ಕೊರಗ ಸಮುದಾಯ ಆ ಒಂದು ವಿಚಾರದಲ್ಲಿ ಭಾರೀ ಮರ್ಯಾದೆ ಪಡೆಯುತ್ತಿತ್ತೆಂದು ತಿಳಿಯಬೇಡಿ!
ಕಾರಣವಿಷ್ಠೇ, ಅಂದಿನ ಕಾಲದಲ್ಲಿ ಕಾಲು ದಾರಿಗಳು ಬಹಳ ದುರ್ಗಮವಾಗಿತ್ತು. ದಟ್ಟ ಕಾಡಿತ್ತು! ಹಳ್ಳ ಕೊಳ್ಳದ ಮಧ್ಯೆ ಹಾದು ಹೋಗಬೇಕಾದರೆ ಆಳ ಅರಿವು ಗೊತ್ತಿರಲ್ಲಿಲ್ಲ. ಒಟ್ಟಾರೆಯಾಗಿ ದುರ್ಗಮ ದಾರಿ ಬಹಳ ಅಪಾಯಕಾರಿಯಾಗಿತ್ತು. ಕಾಡಿನ ಕ್ರೂರ ಮೃಗಗಳು ಹಸಿವೆಗಾಗಿ ಮನುಷ್ಯರ ಮೇಲೆ ದಾಳಿಯಿಟ್ಟರೆ, ಅದು ಕೊರಗರನ್ನು ತಿನ್ನಲಿ. ಏನಾದರೂ ಅನಾಹುತವಾದರೆ - ಅದು ಕೊರಗರಿಗೇ ಆಗಲಿ, ನಮಗೆ ಏನೂ ಆಗಬಾರದು ಎನ್ನುವ ದುರಾಲೋಚನೆ ಮತ್ತು ದೂರಾಲೋಚನೆ ಅಂದಿನ ಉತ್ತಮರಿಗಿತ್ತು!!
- ಹೃದಯ