Pages

Saturday 3 May 2014

ಯುಜಿಸಿ ಪಾಸಾದ ಕೊರಗ ಸಮುದಾಯದ ಪ್ರಥಮ ಪ್ರತಿಭೆ...

ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಮೂಲನಿವಾಸಿಗಳಾದ ಕೊರಗರು ನಿದಾನವಾಗಿಯಾದರೂ ಶೈಕ್ಷಣಿಕ ರಂಗದಲ್ಲಿ ಅತ್ಯುತ್ತಮ ಎನ್ನಬಹುದಾದ ಸಾಧನೆ ಮಾಡುತ್ತಿದ್ದಾರೆ ಎನ್ನುವುದಕ್ಕೆ ಮತ್ತೊಂದು ನಿದರ್ಶನ ಸಬಿತಾ ಗುಂಡ್ಮಿ.


ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪದ ಗುಂಡ್ಮಿ ಎಂಬಲ್ಲಿ ಜನಿಸಿದ ಸಬಿತಾ, ಬಾಲ್ಯದಲ್ಲಿಯೇ ತನ್ನ ಹೆತ್ತವರನ್ನು ಕಳೆದುಕೊಂಡ ತಬ್ಬಲಿ. ಆದರೆ, ತನ್ನ ದೊಡ್ಡಮ್ಮ ಮತ್ತು ದೊಡ್ಡಪ್ಪನ ಆಸರೆಯಲ್ಲಿ - ಪ್ರೀತಿಯ ಹಾರೈಕೆಯಲ್ಲಿ ಬೆಳೆದ ಸಬಿತಾ, ಬ್ರಹ್ಮಾವರದಲ್ಲಿಯೇ ತನ್ನ ಪ್ರಾಥಮಿಕ ಶಿಕ್ಷಣವನ್ನು ಪೂರ್ತಿಗೊಳಿಸಿದರು.
ಉಡುಪಿ ಜಿಲ್ಲೆಯ ಮಂಚಕಲ್ ಪೆರ್ನಾಲಿನ ಸಮಗ್ರ ಗ್ರಾಮೀಣ ಆಶ್ರಮ ಮತ್ತು ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಜೊತೆಗೆ ಕೆಲಸ ಮಾಡಿಕೊಂಡ ಸಬಿತಾ ತಾನೂ ಕಲಿಯಬೇಕೆಂಬ ಕನಸು ಕಂಡವರು. ಅವರ ಆಕಾಂಕ್ಷೆಗೆ ಸಮಗ್ರ ಗ್ರಾಮೀಣ ಆಶ್ರಮ ಬೆಂಬಲವಾಗಿ ನಿಂತಿತು.

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸಮಾಜ ಶಾಸ್ತ್ರದಲ್ಲಿ ಸ್ನಾತ್ತಕೋತ್ತರ ಪದವಿ ಮುಗಿಸಿದ ಸಬಿತಾ ಯುಜಿಸಿ ನೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು ನಡೆಸಿದ ಸ್ಲೆಟ್ ಪರೀಕ್ಷೆಯಲ್ಲಿಯೂ ಉತ್ತೀರ್ಣರಾಗುವ ಮೂಲಕ ಕೊರಗ ಸಮುದಾಯದ ಪ್ರಪ್ರಥಮ ಯುಜಿಸಿ ತೇರ್ಗಡೆಗೊಂಡ ಸಾಧಕಿಯೆಂಬ ಕೀರ್ತಿಗೆ ಪಾತ್ರರಾದರು. ಆ ಮೂಲಕ ಒಟ್ಟು ಸಮಾಜ ಕೊರಗ ಬುಡಕಟ್ಟು ಸಮುದಾಯವನ್ನು ಶೈಕ್ಷಣಿಕ ರಂಗದಲ್ಲಿಯೂ ಕಾಣುವಂತಾಯಿತು. ಅಭಿನಂದನೆಗಳು ಸಬಿತಾ...
- ಹೃದಯ

0 comments:

Post a Comment

 

Blogger news

Blogroll

About