ಶತಮಾನ ಶತಮಾನ ಶೋಷಣೆಗೆ ಒಳಗಾಗಿ
ಗತಿಕೆಟ್ಟು ಬದುಕಿದೆವು ಈ ಮಣ್ಣಿನಲ್ಲಿ
ಇತಿಹಾಸ ಉರುಳುತ್ತಿದೆ ಗತಿಚಕ್ರ ಹೊರಳುತ್ತಿದೆ
ಮತಿವಂತರಾಗೋಣ ಮುನ್ನಡೆಯಲಿಲ್ಲಿ
(ರಚನೆ: ಅಂಬಾತನಯ ಮುದ್ರಾಡಿ)
ಪ್ರಿಯ ಬಂಧುಗಳೇ...
ನಾವು ಬೆಳೆಯಬೇಕಿದೆ. ಬೆಳೆಯುತ್ತಿದ್ದೇವೆ. ಮುನ್ನಡೆಯಬೇಕಿದೆ... ಇದಕ್ಕೆ ಪ್ರೀತಿಯ ಓದುಗರಾದ ನೀವು ಕಾರಣರಾಗಬೇಕಿದೆ. ನಾವು ನಿಮ್ಮಿಂದ ಬಯಸುವುದು ಪ್ರೀತಿಯ ಅಪ್ಪುಗೆಯನ್ನು ಮತ್ತು ಪ್ರೋತ್ಸಾಹವನ್ನು.
ಸ್ನೇಹ, ಪ್ರೀತಿ, ಅಭಿವೃದ್ಧಿಯ ಸೇತುವೆಯಾಗಿ ಕೆಲಸ ಮಾಡುವುದು ನಮ್ಮ ಆಶಯ. ನಿಮ್ಮ 'ಶೋಷಿತ ಧ್ವನಿ'ಯನ್ನು ಅಧಿಕಾರಸ್ಥರ ಮನೆ ಬಾಗಿಲಿಗೆ ತಲುಪಿಸುವುದು ನಮ್ಮ ಕನಸು. ನಿಮ್ಮ ಸಮಸ್ಯೆ, ಸುಖ - ದುಃಖ, ಸಂತೋಷ, ಸಂಭ್ರಮ, ಬೇಸರ, ನೊವು - ನಲಿವು, ನೀವು ಅನುಭವಿಸಿದ ಅವಮಾನಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ನಿಮ್ಮ ಭಾವನೆಗಳಿಗೆ ಸ್ಪಂದಿಸುವ ಜನಮಿತ್ರ ಆಗಬೇಕು ಎಂಬುದು ನಮ್ಮ ನೀತಿ.
ಈ ಎಲ್ಲಾ ಕನಸು ಆಶಯಗಳೊಂದಿಗೆ ನಮ್ಮ ಹೊಸ ಅಧ್ಯಾಯ ಆರಂಭಗೊಂಡಿದೆ. ನಾವು ಇಟ್ಟ ಪ್ರತಿ ಹೆಜ್ಜೆಯೂ ಪ್ರಬಲವಾಗಿ ಮೂಡಿ ಬರಬೇಕು. ಆ ಪ್ರತೀ ಹೆಜ್ಜೆ ಗುರುತಿನಲ್ಲೂ ನಮ್ಮವರು ಮುಂದುವರಿಯಬೇಕು. ನಮ್ಮ ನಿಮ್ಮ ನಡುವೆ ಇರುವ ಗೆಳೆತನಕ್ಕೆ ಚ್ಯುತಿ ಬರದಂತೆ ಹೆಜ್ಜೆ ಇಡಬೇಕು. ಇದಕ್ಕೆ ಬೇಕಾಗಿರುವುದು ಎರಡೇ... ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹ.
" ನಾನೊಂದು ಮಗು. ನನ್ನ ಬರುವಿಕೆಗಾಗಿ ಇಡೀ ಜಗತ್ತು ಬೆರಗುಗಣ್ಣಿನಿಂದ ಕಾಯುತ್ತಿತ್ತು. ಈಗ ಸಮಸ್ತ ಜನಾಂಗ ನಾನು ಏನಾಗುತ್ತೇನೆಂಬುದನ್ನು ಕುತೂಹಲದಿಂದ ಗಮನಿಸುತ್ತಿದೆ. ಏಕೆಂದರೆ, ನಾನು ಏನಾಗುತ್ತೇನೋ ನಾಳಿನ ನನ್ನ ಜನಾಂಗ ಅದನ್ನೇ ಅನುಸರಿಸುತ್ತದೆ!
ನಾನೊಂದು ಮಗು. ನನ್ನ ಬದುಕು ಭವಿಷ್ಯ ನಿಮ್ಮ ಕೈಯಲ್ಲಿದೆ. ನಾನು ಸೋಲುವೆನೆ ಅಥವಾ ಗೆಲ್ಲುವೆನೆ ಎಂಬುದನ್ನು ನಿರ್ಧರಿಸುವವರು ನೀವೆ. ನನ್ನ ಬೆಳವಣಿಗೆಗೆ ಬೇಕಾದ ಅವಕಾಶಗಳನ್ನು ನೀಡುವಂತೆ ನಿಮ್ಮಲ್ಲಿ ಪ್ರಾರ್ಥಿಸುತ್ತೇನೆ. ಮುಂದೆ, ಈ ಪ್ರಪಂಚಕ್ಕೆ ನಾನೊಂದು ವರ ವಾಗುವಂತೆ ನನ್ನನ್ನು ಸಜ್ಜುಗೊಳಿಸಲು ನಿಮ್ಮಲ್ಲಿ ವಿನಮ್ರವಾಗಿ ಬೇಡುತ್ತೇನೆ..."
ನಿಮ್ಮ ಪ್ರೀತಿಯ...
- ಜಿ.ಭವಾನಿ ಶಂಕರ ಕೊರಗ
ಗತಿಕೆಟ್ಟು ಬದುಕಿದೆವು ಈ ಮಣ್ಣಿನಲ್ಲಿ
ಇತಿಹಾಸ ಉರುಳುತ್ತಿದೆ ಗತಿಚಕ್ರ ಹೊರಳುತ್ತಿದೆ
ಮತಿವಂತರಾಗೋಣ ಮುನ್ನಡೆಯಲಿಲ್ಲಿ
(ರಚನೆ: ಅಂಬಾತನಯ ಮುದ್ರಾಡಿ)
ಪ್ರಿಯ ಬಂಧುಗಳೇ...
ನಾವು ಬೆಳೆಯಬೇಕಿದೆ. ಬೆಳೆಯುತ್ತಿದ್ದೇವೆ. ಮುನ್ನಡೆಯಬೇಕಿದೆ... ಇದಕ್ಕೆ ಪ್ರೀತಿಯ ಓದುಗರಾದ ನೀವು ಕಾರಣರಾಗಬೇಕಿದೆ. ನಾವು ನಿಮ್ಮಿಂದ ಬಯಸುವುದು ಪ್ರೀತಿಯ ಅಪ್ಪುಗೆಯನ್ನು ಮತ್ತು ಪ್ರೋತ್ಸಾಹವನ್ನು.
ಸ್ನೇಹ, ಪ್ರೀತಿ, ಅಭಿವೃದ್ಧಿಯ ಸೇತುವೆಯಾಗಿ ಕೆಲಸ ಮಾಡುವುದು ನಮ್ಮ ಆಶಯ. ನಿಮ್ಮ 'ಶೋಷಿತ ಧ್ವನಿ'ಯನ್ನು ಅಧಿಕಾರಸ್ಥರ ಮನೆ ಬಾಗಿಲಿಗೆ ತಲುಪಿಸುವುದು ನಮ್ಮ ಕನಸು. ನಿಮ್ಮ ಸಮಸ್ಯೆ, ಸುಖ - ದುಃಖ, ಸಂತೋಷ, ಸಂಭ್ರಮ, ಬೇಸರ, ನೊವು - ನಲಿವು, ನೀವು ಅನುಭವಿಸಿದ ಅವಮಾನಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ನಿಮ್ಮ ಭಾವನೆಗಳಿಗೆ ಸ್ಪಂದಿಸುವ ಜನಮಿತ್ರ ಆಗಬೇಕು ಎಂಬುದು ನಮ್ಮ ನೀತಿ.
ಈ ಎಲ್ಲಾ ಕನಸು ಆಶಯಗಳೊಂದಿಗೆ ನಮ್ಮ ಹೊಸ ಅಧ್ಯಾಯ ಆರಂಭಗೊಂಡಿದೆ. ನಾವು ಇಟ್ಟ ಪ್ರತಿ ಹೆಜ್ಜೆಯೂ ಪ್ರಬಲವಾಗಿ ಮೂಡಿ ಬರಬೇಕು. ಆ ಪ್ರತೀ ಹೆಜ್ಜೆ ಗುರುತಿನಲ್ಲೂ ನಮ್ಮವರು ಮುಂದುವರಿಯಬೇಕು. ನಮ್ಮ ನಿಮ್ಮ ನಡುವೆ ಇರುವ ಗೆಳೆತನಕ್ಕೆ ಚ್ಯುತಿ ಬರದಂತೆ ಹೆಜ್ಜೆ ಇಡಬೇಕು. ಇದಕ್ಕೆ ಬೇಕಾಗಿರುವುದು ಎರಡೇ... ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹ.
" ನಾನೊಂದು ಮಗು. ನನ್ನ ಬರುವಿಕೆಗಾಗಿ ಇಡೀ ಜಗತ್ತು ಬೆರಗುಗಣ್ಣಿನಿಂದ ಕಾಯುತ್ತಿತ್ತು. ಈಗ ಸಮಸ್ತ ಜನಾಂಗ ನಾನು ಏನಾಗುತ್ತೇನೆಂಬುದನ್ನು ಕುತೂಹಲದಿಂದ ಗಮನಿಸುತ್ತಿದೆ. ಏಕೆಂದರೆ, ನಾನು ಏನಾಗುತ್ತೇನೋ ನಾಳಿನ ನನ್ನ ಜನಾಂಗ ಅದನ್ನೇ ಅನುಸರಿಸುತ್ತದೆ!
ನಾನೊಂದು ಮಗು. ನನ್ನ ಬದುಕು ಭವಿಷ್ಯ ನಿಮ್ಮ ಕೈಯಲ್ಲಿದೆ. ನಾನು ಸೋಲುವೆನೆ ಅಥವಾ ಗೆಲ್ಲುವೆನೆ ಎಂಬುದನ್ನು ನಿರ್ಧರಿಸುವವರು ನೀವೆ. ನನ್ನ ಬೆಳವಣಿಗೆಗೆ ಬೇಕಾದ ಅವಕಾಶಗಳನ್ನು ನೀಡುವಂತೆ ನಿಮ್ಮಲ್ಲಿ ಪ್ರಾರ್ಥಿಸುತ್ತೇನೆ. ಮುಂದೆ, ಈ ಪ್ರಪಂಚಕ್ಕೆ ನಾನೊಂದು ವರ ವಾಗುವಂತೆ ನನ್ನನ್ನು ಸಜ್ಜುಗೊಳಿಸಲು ನಿಮ್ಮಲ್ಲಿ ವಿನಮ್ರವಾಗಿ ಬೇಡುತ್ತೇನೆ..."
ನಿಮ್ಮ ಪ್ರೀತಿಯ...
- ಜಿ.ಭವಾನಿ ಶಂಕರ ಕೊರಗ
0 comments:
Post a Comment